ನವೀಕೃತ ಗೋಶಾಲೆ ನಿರ್ಮಾಣ, ವನೌಷಧ ಉದ್ಯಾನ, ನವಗ್ರಹ ಉದ್ಯಾನ, ಅತಿಥಿ ಗೃಹದ ನಿರ್ಮಾಣ, ವೇದಪಾಠ ಶಾಲಾಭವನ, ಆಂಜನೇಯ ದೇವಾಲಯ, ವಿದ್ಯಾದಾನ, ಸಂಜೀವಿನೀ ಯೋಜನೆ - ಇವೇ ಮೊದಲಾದ ಅನೇಕ ಯೋಜನೆಗಳನ್ನು ಶ್ರೀಮಠವು ಬಾಳೇಕುದ್ರುವಿನಲ್ಲಿ ಹಮ್ಮಿಕೊಂಡಿದೆ.
ಅನ್ನ ಸಂತರ್ಪಣೆ : ಶ್ರೀಮಠಕ್ಕೆ ಬರುವ ಎಲ್ಲರಿಗೂ ಅನ್ನ್ನದಾನದ ಯೋಜನೆ.
ಪ್ರಾಚ್ಯ ಗುರುಕುಲ : ಸಾಂಗೋಪಾಂಗ ವೇದವಿದ್ಯಾ ಗುರುಕುಲ.
ನವ್ಯ ಗುರುಕುಲ : ಆಧುನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವೇದಾಧ್ಯಯನ, ಪಂಚಮುಖಿ ಶಿಕ್ಷಣ
ಕಾಮಧೇನು : ಗೋವಿಗಾಗಿ ವಿವಧ ಪ್ರಕಲ್ಪಗಳು.
ವಿದ್ಯಾರ್ಥಿಮಿತ್ರ : ಪ್ರತಿಭಾ ಸಂಪನ್ನ ಬಡ ವಿದ್ಯಾರ್ಥಗಳಿಗೆ ಸಹಾಯ
ಜೀವನ-ಸಂಜೀವಿನಿ : ಅತೀ ಕಷ್ಟ ಹಾಗೂ ಬಡತನದಲ್ಲಿ ಇರುವವರಿಗೆ ಸಹಕರಿಸುವುದು.
ಸಂಸ್ಕೃತಿ - ಸಂಪ್ರದಾಯದ ಪ್ರಚಾರ : ಶಂಕರ ಸ್ತೋತ್ರ ಸ್ಪರ್ಧೆ, ಸಾಮೂಹಿಕ ಉಪನಯನ, ಉಪನ್ಯಾಸಗಳು, ವಿದ್ವತ್ ಗೋಷ್ಠಿಗಳು ಹಾಗೂ ಶಿಬಿರಗಳು.