| |
ಶ್ರೀಮಠದ ಆರಾಧ್ಯಮೂರ್ತಿ - ಉಗ್ರನೃಸಿಂಹ ದೇವರು. ಪ್ರಹ್ಲಾದ, ಅಗಸ್ತ್ಯ ಮುನಿಗಳಿಂದ ನಿರಂತರ ಅರ್ಚಿಸಲ್ಪಟ್ಟು ನಂತರ ಶ್ರೀ ಉಗ್ರನೃಸಿಂಹ ಮೂರ್ತಿ ಶ್ರೀಕೈವಲ್ಯಾಶ್ರಮ ಸ್ವಾಮಿಗಳಿಗೆ ಪ್ರಾಪ್ತವಾಯಿತು. ಸ್ವಪ್ನದಲ್ಲಿ ಕಾಣಿಸಿಕೊಂಡ ಶ್ರೀ ನೃಸಿಂಹ ದೇವರು ಶ್ರೀ ಶ್ರೀ ಸ್ವಾಮಿಗಳಿಗೆ ನಿರ್ದೇಶನ ನೀಡಿದಂತೆಯೇ ಅಲಕನಂದಾದದಲ್ಲಿ ಅರ್ಘ್ಯಾಂಜಲಿಯಲ್ಲಿ ದೊರಕಿದರು. ದೇವರ ನಿರ್ದೇಶನದಂತೆ ತ್ರಿವೇಣಿ ಸಂಗಮ ಸ್ಥಳವಾಗಿರುವ ಬಾಳೇಕುದ್ರುವಿನಲಿ ಶ್ರೀ ಶ್ರೀ ಕೈವಲ್ಯಾಶ್ರಮ ಸ್ವಾಮಿಗಳು ದೇವರ ಪ್ರತಿಷ್ಠಾಪನೆ ಮಾಡಿದರು.
ಅಂತೆಯೇ ಶ್ರೀ ಮಠದಲ್ಲಿ ಶ್ರೀ ಸಂಗಮೇಶ್ವರ, ಪಟ್ಟದ ದೇವರು ಶ್ರೀ ನೃಸಿಂಹ, ಶ್ರೀ ವಾಗೀಶ್ವರಿ, ಶಾರದಾಂಬೆ, ಕೆರೆಕಟ್ಟೆ ಗಣಪತಿ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳಿವೆ. ಶ್ರೀಮಠಕ್ಕೆ ರಕ್ಷಣಾದೇವತೆ ಇಲ್ಲಿಯ ರಕ್ತೇಶ್ವರಿ ಹಾಗೂ ಬೊಬ್ಬರ್ಯ
|
|